Posts

Showing posts from July, 2025
Image
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ (ರಿ) ಮತ್ತುಅನಿರ್ದಿಷ್ಟಾವಧಿ ಉಪವಾಸ ಮತ್ತು ಧರಣಿ ಸತ್ಯಾಗ್ರಹಸ್ಥಳ : ಕ್ರೀಡಂ ಪಾರ್ಕ್, ಬೆಂಗಳೂರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸಂಘಟನೆಗಳ ಒಕ್ಕೂಟ ಬೇಡಿಕೆಗಳು 1) ಸರ್ಕಾರ ಚುನಾವಣೆ ಪೂರ್ವ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಸಾರಿಗೆ ನೌಕರರಿಗೂ ಸರ್ಕಾರಿ ನೌಕರರಂತೆ ಸರಿಸಮಾನ ವೇತನ (7)de decsis wotteria raccone) 01/01/2024 ໐໐໐ 50 2) 01/01/2020 ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಮಾಡಲಾಗಿದ್ದು ಸದರಿ ವೇತನ ಪರಿಷ್ಕರಣೆಯ 38 ತಿಂಗಳ ಹಿಂಬಾಜಿಯನ್ನು ನೀಡುವುದು (ನಿವೃತ್ತ ನೌಕರರಿಗೆ ಮೊದಲ ಆದ್ಯತೆಯಲ್ಲಿ ಅವರ ಹಿಂಬಾಕಿ ಮತ್ತು ಇವರ ಸೇವಾ ಆರ್ಥಿಕ ಸೌಲಭ್ಯಗಳನ್ನು ನೀಡುವುದು) 8) 2020 ಮತ್ತು 2021 ರ ಸಾರಿಗೆ ಮುಷ್ಕರದ ಸಮಯದಲ್ಲಿ ಆಗಿರುವ ವಜಾ ಮತ್ತು ಇತರೆ ಪ್ರಕರಣಗಳ ಶಿಕ್ಷಾದೇಶಗಳನ್ನು ರದ್ದು ಪಡಿಸಿ ಸೌವರ್ಧ ರೀತಿಯಲ್ಲಿ ಇತ್ಯರ್ಥ ಪಡಿಸುವುದು ಹಾಗೂ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯುವುದು 4) 1992 ರ ನಂತರ, ಸಂಘಗಳಲ್ಲಿ ಕಾರ್ಮಿಕ ಸಂಘಗಳನ್ನು ಆಚರಿಸಲಾಗಲಿಲ್ಲ. ದೂಡಲು ಆದರಲ್ಲಿ ಬೂಡುವುದು..
Image
  ಶ್ರೀ ಶ್ಯಾಮ್ ರಾಹುಲ್ ರವರು ಅವರ ಗುರುಗಳಾದ ಶ್ರೀ ರಾಜಲಿಂಗಂ ರವರ ಮಾರ್ಗದರ್ಶನದಂತೆ ಶಾಮ್ ರಾಹುಲ್ ಅವರು ಕನ್ನಡಿಗನಾಗಿ 60 ನೇ ಬಾರಿ ಕರಾಟೆಯಲ್ಲಿ ವಿಶ್ವ ದಾಖಲೆ ಪಡೆದ ಭಾರತದ ಕನ್ನಡಿಗ.  ಇದೀಗ ಐದನೇ ಬಾರಿ ಬ್ಲಾಕ್ ಬೆಲ್ಟನ್ನು ಪಡೆದಿದ್ದಾರೆ. ಅವರಿಗೆ ಅಭಿನಂದನೆಗಳು.   ಏ.ವಿ.ಆರ್ ಇನ್ಸ್ಟಿಟ್ಯೂಟ್ ನ ಉಪಾಧ್ಯಕ್ಷರು ಹಾಗೂ ಬೆಂಗಳೂರು ಸೆಲ್ಫ್ ಡಿಫೆನ್ಸ್ ಮತ್ತು ಬೆಂಗಾವಲುಗಾರರು ಮತ್ತು ಭದ್ರತಾ ತಂಡದ ಸಂಸ್ಥಾಪಕರು. AKSKA ನಲಿ ರಾಜ್ಯ ಮಟ್ಟದ ಚಿನ್ನದ ಪದಕ ಮಾಡಿ ಕೈ ಅನ್ನೋ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಪದಕಗಳು. ಮತ್ತು ಹಲವಾರು ಕರಾಟೆ ಪಂದ್ಯಾವಳಿಯಲ್ಲಿ ಸಾಕಷ್ಟು ಚಿನ್ನದ ಪದಕ ಪಡೆದಿದ್ದಾರೆ. ಅಂತರಾಷ್ಟ್ರೀಯ ಅಲ್ಲಿಯೂ ಕೂಡ  2ನೇ ಬಾರಿ ಚಿನ್ನದ ಪದಕ ಪಡೆದಿದ್ದಾರೆ. ಕಿಯೋ ದಲ್ಲಿ ಜಡ್ಜ್ ಆಗಿ ಬ್ಯಾಡ್ಜ್ ಪಡೆದು ಡಬ್ಲ್ಯು.ಎಸ್ ಕೆ.ಎಫ್ ನಲ್ಲಿ ಜಪಾನ್ ಸರ್ಟಿಫಿಕೇಟ್ ಲೈಸೆನ್ಸ್ ಅನ್ನು ಪಡೆದಿದ್ದಾರೆ. ಮುಖ್ಯವಾಗಿ ಮಕ್ಕಳಿಗೆ ಸೆಲ್ಫ್ಡಿಫೆನ್ಸ್ನಲ್ಲಿ ಅರಿವು ಮೂಡಿಸಿ. ಎಲ್ಲಾ ಶಾಲೆಯ ಪೋಷಕರು ಸ್ನೇಹಜೀವಿ ಮತ್ತು ಮಕ್ಕಳ ಪ್ರೀತಿಯ ಚಕ್ರವರ್ತಿ ಎಂದು ಹೆಸರು ಕೊಟ್ಟಿದ್ದಾರೆ. ಹಾಗೂ ಹಲವಾರು ಸಮಾಜಮುಖಿ ಕೆಲಸದಲ್ಲಿ ತೊಡಗಿದ್ದಾರೆ.
Image
  28ನೇ ರಾಜ್ಯಮಟ್ಟದ ಅಂತರ ಶಾಲಾ ಬಾಲಕ, ಬಾಲಕಿಯರ ವಾಲಿಬಾಲ್ ಚಾಂಪಿಯನ್ ಶಿಪ್ ಬಾಂಧವ ಕೌನ್ಸಿಲರ್ ಕಪ್-2025 ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣ ಅಂತರಾಷ್ಟ್ರೀಯ ಕ್ರೀಡಾಂಗಣವಾಗಿ ರೂಪಿಸಲು ಹೆಚ್ಚಿನ ಅನುದಾನ ನೀಡಿಕೆ* *ಸರ್ಕಾರಿ ಶಾಲಾ ಮಕ್ಕಳಿಗೆ ಹೈಟೆಕ್ ಶಿಕ್ಷಣ, ಕ್ರೀಡೆಯಲ್ಲಿ ಪ್ರೋತ್ಸಹ, ನಮ್ಮ ಶಾಲೆಯ ಮಕ್ಕಳು ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪದಕ ಗೆಲ್ಲಬೇಕು-ಸಚಿವ ರಾಮಲಿಂಗಾರೆಡ್ಡಿ* ಜಯನಗರ: ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ 28ನೇ ರಾಜ್ಯಮಟ್ಟದ ಅಂತರಶಾಲಾ ವಾಲಿ ಬಾಲ್ ಚಾಂಪಿಯನ್ ಶಿಪ್ ಬಾಲಕ, ಬಾಲಕಿಯರ ಬಾಂದವ ಕೌನ್ಸಲಿರ್ ಕಪ್-2025ಮೂರು ದಿನಗಳ ಕಾಲ ನಡೆಯಲಿದೆ. ಉದ್ಘಾಟನೆಯನ್ನು ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿರವರು, ಅವಧೂತ ವಿನಯ್ ಗುರೂಜಿರವರು, ಶಾಸಕಿ, ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಸೌಮ್ಯರೆಡ್ಡಿ, ಆಡಳಿತ ಪಕ್ಷದ ಮಾಜಿ ನಾಯಕ, ಬಾಂಧವ ಸಂಸ್ಥೆ ಸಂಸ್ಥಾಪಕ.ನಾಗರಾಜುರವರು, ಪದ್ಮನಾಭನಗರ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಪ್ರಮೋದ್ ಶ್ರೀನಿವಾಸ್ ರವರು ವಾಲಿಬಾಲ್ ಚೆಂಡು ಹೊಡೆಯುವ ಮೂಲಕ ನಂತರ ದೀಪ ಬೆಳಗಿಸಿ ಉದ್ಘಾಟಿಸಿದರು. *ಸಚಿವ ರಾಮಲಿಂಗಾರೆಡ್ಡಿ* ರವರು ಮಾತನಾಡಿ ನಾವು ಸಸಿ ನೆಟ್ಟ ಮೇಲೆ ಗಿಡವಾಗಬೇಕಾದರೆ ನೀರು, ಬಿಸಿಲು, ನೆರಳು ಎಲ್ಲವು ಸರಿಯಾಗಿ ಇದ್ದಾಗ ದೊಡ್ಡದಾಗಿದೆ ಮರವಾಗಿ ಬೆಳೆಯುತ್ತದೆ ಅದೇ ರೀತಿ ಚಿಕ್ಕ ವಯಸ್ಸಿನ ಮಕ್ಕಳಿಗೆ ಉತ್ತಮ ಶಾಲೆ, ಗುರ...
Image
  ಜನಮನಗೆದ್ದ ನೃತ್ಯಂ ದಾಸ ಸಾಹಿತ್ಯ ಚಿಂತನ  ಕಳೆದ ವಾರಾಂತ್ಯದಲ್ಲಿ ಬೆಂಗಳೂರಿನ ಕೈಲಾಸ ಕಲಾಧರ ಸಂಸ್ಥೆಯು ನಡೆದಿದ್ದ ಡಾ. ಕೆ .ಜಯಲಕ್ಷ್ಮೀ ಜಿತೇಂದ್ರ  ಅವರ ಶಿಷ್ಯರಾದ ಕು. ರಾಘವೀ ರಾಮಕುಮಾರ್ ಮತ್ತು ಕು. ರೋಶಿಣಿ ಮುರಳಿ ಅವರ ಭರತನಾಟ್ಯ ರಂಗವೇದಾರ್ಚನೆ ಕಾರ್ಯಕ್ರಮವು ಅತ್ಯುತ್ತಮವಾಗಿ ಪ್ರಸ್ತುತಪಡಿಸಿತು. ನಮ್ಮ ನಾಡಿನ ಹಲವು ಹರಿದಾಸರ ರಚನೆಯ ಗುಚ್ಛವನ್ನು ಸೃಜನಾತ್ಮಕವಾಗಿ ನೃತ್ಯದಲ್ಲಿ ಅಳವಡಿಸಿದ್ದು ಸ್ತುತ್ಯಾರ್ಹ. ಕಡೆಯಲ್ಲಿ ಗೋಪಿಕಾ ಸ್ತ್ರೀಯರೊಡನೆ ಯಶೋಧಾ ನಂದನ ಕೃಷ್ಣನು ಪ್ರದರ್ಶನ ಮಧ್ಯದಿಂದಲೇ ಆಗಮಿಸಿ ವೇದಿಕೆ ಏರಿದ್ದು ಎಲ್ಲ ಕಲಾರಸಿಕರಿಗೆ ರೋಮಾಂಚನವಾದದ್ದು ಸುಳ್ಳಲ್ಲ. ನಂತರದಲ್ಲಿ ಬಂದ ದಾಸ ಸಮೂಹ ಎಲ್ಲರನ್ನೂ ಭಾವ ಪರವಶ ಸನ್ನಿವೇಶ ಮಾಡಿತು. ನಮ್ಮ ಕನ್ನಡ ನಾಡಿನ ಹೆಮ್ಮೆಯ ರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಸ್ಥಾನದಲ್ಲಿ ರಚಿಸಿದ್ದ ಚಾಮುಂಡೇಶ್ವರಿ ದೇವಿ ಕುರಿತಾದ ದರುವರ್ಣ ಪ್ರಸ್ತುತಿಗೆ ಎಲ್ಲರೂ ತಲೆದೂಗಿದರು.   ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಶ್ರೀಯುತ ಬಿ.ಎಸ್.ನೀಲಕಂಠಯ್ಯ ಅವರು ಮಾತನಾಡಿ, ವಿದ್ವಾನ್ಮೇಳದಲ್ಲಿದ್ದ ಶ್ರೀಮತಿ ಭಾರತಿ ವೇಣುಗೋಪಾಲ್ , ಶ್ರೀ ಸಿ. ಮಧುಸೂದನ್, ಎನ್ ವಿದ್ಯಾಶಂಕರ್, ಸುಮಧುರ್ ಆನೂರು, ಪ್ರಣವ್ ಕೌಶಿಕ್ ಈ ಎಲ್ಲಾ ಸಂಗೀತಜ್ಞರನ್ನು ಶ್ಲಾಘಿಸಿದರು. ಯೋಗ ನಿಪುಣರಾದ ಶ್ರೀಯುತ ಮೋಹನರಮಣ ಅವರು ಮಾತನಾಡಿ ನಾಟ್ಯವು ಒಂದು ಯೋಗ, ನಮ್ಮ ಪರಂಪರೆಯಲ್ಲಿರುವ...