ಎಜುಕೇಷನ್ ಟ್ರಸ್ಟ್ ಹಾಗೂ ತೊದಲ್ನುಡಿ ಮಾಸಪತ್ರಿಕೆಯ ಸಹಯೋಗದಿಂದ ಆಯೋಜಿಸಿದ್ದ 30 ದಿನಗಳ ಉಚಿತ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭ
ವೈಟ್ ಫೀಲ್ಡ್ ಬಳಿಯಿರುವ ಸಂತ ಜೋಸೆಫರ ಅಂಗ್ಲ ಪ್ರೌಢಶಾಲೆಯಲ್ಲಿ ಇಂದು ನಡೆದ ಶ್ರೀ ಸರಸ್ವತಿ ಎಜುಕೇಷನ್ ಟ್ರಸ್ಟ್ ಹಾಗೂ ತೊದಲ್ನುಡಿ ಮಾಸಪತ್ರಿಕೆಯ ಸಹಯೋಗದಿಂದ ಆಯೋಜಿಸಿದ್ದ 30 ದಿನಗಳ ಉಚಿತ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭ ಹಾಗೂ ತೊದಲ್ನುಡಿ ಮಾಸಪತ್ರಿಕೆಯ ದಶಮಾನೋತ್ಸವ ಸಮಾರಂಭದಲ್ಲಿ ಡಾ. ಸುಷ್ಮಾ ಶಂಕರ್ ನೇತೃತ್ವದ ಮಾಸಪತ್ರಿಕೆಯ 10ನೇ ವಾರ್ಷಿಕ ಸಂಚಿಕೆ ಬಿಡುಗಡೆ ಮಾಡಲಾಯಿತು. ಇದೇ ಸಮಾರಂಭದಲ್ಲಿ, 2023ನೇ ಸಾಲಿನ 'ಬಾಲ ಸಾಹಿತಿ' ಪ್ರಶಸ್ತಿಯನ್ನು ಬಾಗಲಕೋಟೆ ಜಿಲ್ಲೆಯ ಕುಮಾರಿ ನಾಗರತ್ನ ಜಿ ಇವರಿಗೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಕವಿರತ್ನ ಡಾ. ವಿ ನಾಗೇಂದ್ರ ಪ್ರಸಾದ್, ಹಿರಿಯ ಸಾಹಿತಿ ಡಾ. ನಾ ದಾಮೋದರ ಶೆಟ್ಟಿ, ಕನ್ನಡ ಅಭಿವೃದ್ಧಿ ಪಾಧಿಕಾರದ ಕಾರ್ಯದರ್ಶಿಗಳಾದ ಡಾ. ಸಂತೋಷ ಹಾನಗಲ್ಲ, ಮಲಯಾಳದ ಹಿರಿಯ ಕವಿ ಒ. ಎನ್ ವಿ. ಕುರುಪ್ ಅವರ ಮೊಮ್ಮಗಳಾದ ಶ್ರೀಮತಿ ಅಪರ್ಣ ರಾಜೀವ್ ಉಪಸ್ಥಿತರಿದ್ದರು.